Friday, November 12, 2010

ಪೇಟೆಂಟು

 ಗೋಕುಲದಲ್ಲೀಗ ಭಾರೀ ಸಡಗರ!
ಕೃಷ್ಣಾಷ್ಟಮಿಯಲ್ಲ,
ಕೃಷ್ಣ-ರಾಧೆಯರ ಪ್ರೇಮದ ವಾರ್ಷಿಕೋತ್ಸವವೂ ಅಲ್ಲ.
ನಂದನ ಮಗನ ಮರಿಮೊಮ್ಮಗ
ಮೊಸರಿಗೆಂದು ಹಾಕಿದ ಪೇಟೆಂಟು ಅಂಟಿಕೊಂಡಿದೆಯಂತೆ.
ಬೆಣ್ಣೆ-ತುಪ್ಪಗಳ ಮಾತಿರಲಿ,
ಮೊಸರಿನ ಹೆಸರಿಗೂ ಕಪ್ಪ ಕೊಡಬೇಕಂತೆ!

ಅದ ಕೇಳಿದ ಗೊಲ್ಲರ ಹಿಂಡು,
ಗೋವುಗಳೆಲ್ಲವ ಕಾಳಿಂದಿಯಲಿ ಬಿಟ್ಟು
ಮರೆತ ಮುರಳಿಯ ಹುಡುಕ ಹೊರಟಿದೆಯಂತೆ,
ದಕ್ಕಿದರೂ ದಕ್ಕೀತು ಅವರಿಗೂ ಸ್ವಲ್ಪ,
ಪಾಪ! ಕಾದು ಕನವರಿಸಿ, ಕನಸಿರಿಸಿ,
ಕುಳಿತಿದ್ದಾರೆ ಮನೆಮಂದಿಯೆಲ್ಲ.

ಇದೆಲ್ಲ ಕೇಳಿದ ನಮ್ಮೂರ ಹೈಕಳೋ!
ಶೂನ್ಯ ಸಂಪಾದನೆಗೋ, ಸಂಶೋಧನೆಗೋ
ಹಾಕಿದರಾಯ್ತೆಂದು ಕಾತರಿಸಿ,
ಮಾರುತ್ತಿದ್ದಾರೆ ಪಾತ್ರೆ-ಪಗಡೆಯನೆಲ್ಲ.

No comments:

Post a Comment